business and finance ಕೊರೊನಾ ಗಂಟುಮೂಟೆ ಕಟ್ಟಿದ ಮೇಲೆ..."ದುಡ್ಡಿನ ವಿಚಾರದಲ್ಲಿ ಹೇಗಿರಬೇಕು?" By kannada.goodreturns.in Published On :: Mon, 13 Apr 2020 14:25:04 +0530 ಕೊರೊನಾ ಆತಂಕ ನಮ್ಮನ್ನು ಬಿಟ್ಟು ಯಾವಾಗ ದೂರ ಆಗಬಹುದು ಎಂಬ ಬಗ್ಗೆ ಯಾರಿಗೂ ನಿಖರವಾದ ಅಂದಾಜಿಲ್ಲ. ಆದರೆ ಇದು ಬಿಟ್ಟುಹೋದ ನಂತರ ಬದುಕು ಈ ಹಿಂದಿನ ರೀತಿ ಇರೋದಿಲ್ಲ ಅನ್ನೋದು ಬಹುತೇಕರ ಅಭಿಪ್ರಾಯ. ವರ್ಕ್ ಫ್ರಮ್ ಹೋಂ, ಮನೆಯಲ್ಲಿ ಕುಟುಂಬದ ಜತೆಗೆ ಸಮಯ ಕಳೆಯೋದು, ಮನೆಯಿಂದ ಆಚೆಯೇ ಹೋಗದಂತೆ ಉಳಿಯೋದು.. ಏನೆಲ್ಲ ನಮ್ಮೆಲ್ಲರ ಪಾಲಿನ ಕನಸುಗಳಾಗಿದ್ದವೋ ಅದು Full Article
business and finance ಲಾಕ್ ಡೌನ್ ಅವಧಿಗೆ ಸಾಲ ಸೌಲಭ್ಯ; ಇಲ್ಲಿದೆ ಪೂರ್ತಿ ಡೀಟೇಲ್ಸ್ By kannada.goodreturns.in Published On :: Wed, 15 Apr 2020 18:12:35 +0530 ಲಾಕ್ ಡೌನ್ ಸಮಯಕ್ಕೆ ನಗದು ಅಗತ್ಯಗಳನ್ನು ಪೂರೈಸಿಕೊಳ್ಳಲು Faircent.comನಿಂದ ಅಲ್ಪಾವಧಿ ಸಾಲ ನೀಡುವ ಯೋಜನೆ ಬುಧವಾರದಿಂದ ಆರಂಭಿಸಲಾಗಿದೆ. ವ್ಯಾಪಾರದ ಸಲುವಾಗಿ, ವೈಯಕ್ತಿಕ ಅಗತ್ಯಗಳಿಗೆ ಈ ಸಾಲ ನೀಡಲಾಗುತ್ತದೆ. ಚಿಲ್ಲರೆ ಮಾರಾಟಗಾರರು, ಸಣ್ಣ ವ್ಯಾಪಾರ ಮಾಡುವವರು ಹಾಗೂ ವೇತನದಾರರನ್ನು ಗುರಿ ಮಾಡಿಕೊಂಡು ಈ ಯೋಜನೆ ರೂಪಿಸಲಾಗಿದೆ. ಈ ಸಾಲ ಪಡೆದುಕೊಂಡವರಿಗೆ ಮೂರು ತಿಂಗಳ ಇಎಂಐ ವಿನಾಯಿತಿ ನೀಡಲಾಗುತ್ತದೆ. ಆ Full Article
business and finance ಕೊರೊನಾ ಸೋಂಕು ಹರಡದಂತೆ ಸುರಕ್ಷಿತವಾಗಿ ಹಣದ ವಹಿವಾಟು ನಡೆಸುವುದು ಹೇಗೆ? By kannada.goodreturns.in Published On :: Mon, 20 Apr 2020 14:34:18 +0530 ವಿಶ್ವದಾದ್ಯಂತ ನರಬಲಿ ಪಡೆಯುತ್ತಿರುವ ಕೊರೊನಾವೈರಸ್ ಮಹಾಮಾರಿ ಭಾರತದಲ್ಲೂ ಆಳವಾದ ಬೇರೂರಲು ಪ್ರಯತ್ನಿಸುತ್ತಿದೆ. ಈ ಸೋಂಕನ್ನು ಬುಡಸಮೇತ ಕಿತ್ತೊಗೆಯಲು ಕೇಂದ್ರ ಸರ್ಕಾರವು ಲಾಕ್ಡೌನ್ ಅಸ್ತ್ರವನ್ನು ಮುಂದಿಟ್ಟುಕೊಂಡು ಹೋರಾಡುತ್ತಿದೆ. ಸೋಂಕನ್ನು ತಡೆಗಟ್ಟಲು ಹಲವಾರು ಕ್ರಮಗಳು, ಯೋಜನೆಗಳನ್ನು ಕೈಗೊಂಡಿದೆ. ಕೊರೊನಾ ಭಯದ ನಡುವೆ ಜನರು ದಿನ ದೂಡುತ್ತಿದ್ದಾರೆ. ಮನೆಗೆ ಸೋಂಕಿನ ಆಗಮನದ ತಡೆಗೆ ಬಹಳ ಎಚ್ಚರಿಕೆವಹಿಸುತ್ತಿದ್ದಾರೆ. ಹೀಗಿರುವಾಗ ಪ್ರತಿಯೊಬ್ಬರಲ್ಲಿಯು ನಮ್ಮಲ್ಲಿರುವ ಆಯ್ಕೆಗಳ Full Article
business and finance EPF ಬಗ್ಗೆ ಕೇಂದ್ರದಿಂದ ಮಹತ್ವದ ಘೋಷಣೆ ಸಾಧ್ಯತೆ; ಆರ್ಥಿಕ ಉತ್ತೇಜನಕ್ಕೆ ದಾರಿ By kannada.goodreturns.in Published On :: Mon, 20 Apr 2020 15:08:16 +0530 100ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಕೆಲಸ ಮಾಡುವ ಸಂಸ್ಥೆಗಳಲ್ಲಿ 15 ಸಾವಿರ ರುಪಾಯಿಯೊಳಗೆ ಆದಾಯ ಸಿಬ್ಬಂದಿಯ ಇಪಿಎಫ್ (ಕಾರ್ಮಿಕ ಭವಿಷ್ಯ ನಿಧಿ) ಪಾಲನ್ನು ಸರ್ಕಾರವೇ ಪಾವತಿಸುವ ಬಗ್ಗೆ ಇರುವ ಪ್ರಸ್ತಾವವನ್ನು ಪರಿಶೀಲಿಸಲಾಗುತ್ತಿದೆ. ಯಾರಿಗೆ ಕಡಿಮೆ ಸಂಬಳ ಬರುತ್ತಿದೆಯೋ ಅಂಥವರಿಗೆ ಈ ಯೋಜನೆಯು ಅನ್ವಯ ಆಗಲಿದೆ. ಈ ಹಿಂದೆ ಸರ್ಕಾರ ಘೋಷಿಸಿದ್ದ ಯೋಜನೆಯ ವಿಸ್ತರಣೆಯ ಭಾಗದಂತೆ ಇದು ಗೋಚರಿಸುತ್ತಿದೆ. Full Article
business and finance ಗೃಹ ಸಾಲ ಪಡೆದವರಿಗೆ ಎಚ್ ಡಿಎಫ್ ಸಿಯಿಂದ ಗುಡ್ ನ್ಯೂಸ್ By kannada.goodreturns.in Published On :: Tue, 21 Apr 2020 22:14:48 +0530 ಪ್ರಮುಖ ಹಣಕಾಸು ಸಂಸ್ಥೆಯಾದ ಎಚ್ ಡಿಎಫ್ ಸಿ ಮಂಗಳವಾರದಂದು ಸಾಲದ ಮೇಲಿನ ಬಡ್ಡಿ ದರವನ್ನು 15 ಬೇಸಿಸ್ ಪಾಯಿಂಟ್ ಕಡಿಮೆ ಮಾಡಿದೆ. ಅಂದ ಹಾಗೆ ಭಾರತದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳು ಸಾಲದ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿದ ನಂತರ ಎಚ್ ಡಿಎಫ್ ಸಿ ಕೂಡ ಆ Full Article
business and finance ಎಲ್ ಐಸಿ ಹೌಸಿಂಗ್ ಫೈನಾನ್ಸ್ ಗೃಹ ಸಾಲದ ಬಡ್ಡಿ ದರದಲ್ಲಿ ಭರ್ಜರಿ ಇಳಿಕೆ By kannada.goodreturns.in Published On :: Thu, 23 Apr 2020 15:46:57 +0530 ಗೃಹ ಸಾಲ ಪಡೆಯುವವರಿಗೆ ಅಲ್ ಐಸಿ ಹೌಸಿಂಗ್ ಫೈನಾನ್ಸ್ ನಿಂದ ಭರ್ಜರಿ ಸುದ್ದಿ ಇದೆ. ಯಾರ CIBIL ಸ್ಕೋರ್ 800 ಅಥವಾ ಅದಕ್ಕಿಂತ ಹೆಚ್ಚಿರುತ್ತದೋ ಅಂಥ ಹೊಸ ಗ್ರಾಹಕರಿಗೆ 7.5 ಪರ್ಸೆಂಟ್ ಬಡ್ಡಿ ದರದಲ್ಲಿ ಗೃಹ ಸಾಲ ನೀಡಲಾಗುತ್ತದೆ. ಮತ್ತು ಸಾಲದ ಮೊತ್ತ ಎಷ್ಟೇ ಆದರೂ ಇದೇ ಬಡ್ಡಿ ದರ ಇರುತ್ತದೆ. ಈ ಹಿಂದೆ ಇದೇ ಕ್ರೆಡಿಟ್ Full Article
business and finance ಕೊರೊನಾ ಎಫೆಕ್ಟ್: ಶ್ರೀಮಂತ ಕುಳಗಳಿಗೆ ತೆರಿಗೆ ಹೆಚ್ಚಿಸಲು ಸಿದ್ಧವಾಗಿದೆ ಯೋಜನೆ By kannada.goodreturns.in Published On :: Sun, 26 Apr 2020 16:53:28 +0530 ಭಾರತೀಯ ಕಂದಾಯ ಸೇವೆ (ಐಆರ್ ಎಸ್)ಗೆ ಸೇರಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಗುಂಪು ಕೊರೊನಾ ವಿರುದ್ಧ ಹೋರಾಟಕ್ಕೆ ಹೊಸ ಯೋಜನೆಯೊಂದನ್ನು ಮುಂದಿಟ್ಟಿದೆ. ಅಲ್ಪಾವಧಿ ಕ್ರಮ ಎಂಬಂತೆ, ಕೇಂದ್ರೀಯ ನೇರ ತೆರಿಗೆ ಮಂಡಳಿಗೆ ಈ ಅಧಿಕಾರಿಗಳು ಸಲಹೆಯನ್ನು ನೀಡಿದ್ದಾರೆ. 10 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರಿಗೆ ಹೆಚ್ಚಿನ ತೆರಿಗೆ ಮತ್ತು ಕೋವಿಡ್- ಪರಿಹಾರ ಸೆಸ್ ವಿಧಿಸಲು ಸಲಹೆ Full Article
business and finance ಓವರ್ ಡ್ರಾಫ್ಟ್ ಖಾತೆ ಇರುವವರಿಗೂ ಎಲೆಕ್ಟ್ರಾನಿಕ್ ಕಾರ್ಡ್ಸ್: ಅನುಕೂಲ ಏನು? By kannada.goodreturns.in Published On :: Tue, 28 Apr 2020 15:09:35 +0530 ಪರ್ಸನಲ್ ಲೋನ್ ರೂಪದಲ್ಲಿ ಇರುವ ಓವರ್ ಡ್ರಾಫ್ಟ್ ಖಾತೆ ಹೊಂದಿರುವ ಸಾಲಗಾರರಿಗೆ ಎಲೆಕ್ಟ್ರಾನಿಕ್ ಕಾರ್ಡ್ಸ್ ಗಳನ್ನು ವಿತರಿಸುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಅನುಮತಿ ನೀಡಿದೆ. ಈಗ ಉಳಿತಾಯ ಖಾತೆ ಇರುವವರಿಗೆ ಹೇಗೆ ಡೆಬಿಟ್ ಕಾರ್ಡ್ ಕೊಡಲಾಗುತ್ತದೋ ಅದೇ ರೀತಿಯ ಕಾರ್ಡ್ ಇದು. ಓವರ್ ಡ್ರಾಫ್ಟ್ ಖಾತೆದಾರರು ಆನ್ ಲೈನ್ ಮತ್ತು ನಗದು ಹೊರತಾದ Full Article
business and finance ಕೊರೊನಾ ಲಾಕ್ ಡೌನ್ ಮುಗಿದ ಮೇಲೆ ನಿಮ್ಮ ವ್ಯವಹಾರ ಹೇಗೆ ಮಾಡ್ತೀರಿ? By kannada.goodreturns.in Published On :: Wed, 29 Apr 2020 14:31:31 +0530 ಇಡೀ ಭಾರತಕ್ಕೆ ಲಾಕ್ ಡೌನ್ ರೂಢಿಯಾಗುತ್ತಾ ಒಂದು ತಿಂಗಳು ಕಳೆದೇ ಹೋಯಿತು. ಇನ್ನೆಷ್ಟು ದಿನ ಹೀಗೇ ಇರುತ್ತದೆ ಎಂಬ ಅಂದಾಜು ಮಾಡುವುದಕ್ಕಂತೂ ಆಗುತ್ತಿಲ್ಲ. ಆದರೆ ಆರ್ಥಿಕ ತಜ್ಞರೋ ಅಥವಾ ವೈದ್ಯರನ್ನೋ ಪರಿಹಾರದ ಬಗ್ಗೆ ಕೇಳಿದರೆ, ಈ ತಕ್ಷಣಕ್ಕೆ ಕೊರೊನಾದೊಂದಿಗೆ ಬದುಕುವುದು ಹೇಗೆ ಅಂತ ಕಲಿಯುವುದೇ ಉತ್ತಮ ಎನ್ನುತ್ತಿದ್ದಾರೆ. ಅದರರ್ಥ, ಕೊರೊನಾ ನಿಯಂತ್ರಣಕ್ಕೆ ಬರುತ್ತದೋ ಇಲ್ಲವೋ ಅಥವಾ ಔಷಧ Full Article
business and finance ಎಷ್ಟು ಕಿ.ಮೀ. ಕಾರು ಓಡಿಸುತ್ತೀರೋ ಅಷ್ಟಕ್ಕೆ ಮಾತ್ರ ಕಟ್ಟಿ ಇನ್ಷೂರೆನ್ಸ್ ಪ್ರೀಮಿಯಂ ! By kannada.goodreturns.in Published On :: Wed, 29 Apr 2020 20:39:56 +0530 ನೀವು ಯಾವ ಪ್ರಮಾಣದಲ್ಲಿ ಕಾರು ಬಳಸುತ್ತೀರೋ ಅದಕ್ಕೆ ತಕ್ಕಂತೆ ಇನ್ಷೂರೆನ್ಸ್ ಪ್ರೀಮಿಯಂ ಕಟ್ಟುವ ಯೋಜನೆಯೊಂದು ಬಂದಿದೆ. ಕೆಲವರು ಬಹಳ ಅಪರೂಪಕ್ಕೆ ತಮ್ಮ ಕಾರನ್ನು ಓಡಿಸುತ್ತಾರೆ. ಮತ್ತೂ ಕೆಲವರು ದಿನ ಬಿಟ್ಟು ದಿನ ಕಾರು ರಸ್ತೆಗೆ ಇಳಿಸುತ್ತಾರೆ. ಆದ್ದರಿಂದ ಕಾರು ಎಷ್ಟು ಕಿಲೋಮೀಟರ್ ಓಡಿಸಿದಿರಿ ಎಂಬ ಆಧಾರದ ಮೇಲೆ ಇನ್ಷೂರೆನ್ಸ್ ಪಾವತಿಸಬಹುದು. PolicyBazar.com ಜತೆಗೆ ಸಹಭಾಗಿತ್ವ ವಹಿಸಿರುವ ಭಾರ್ತಿ Full Article
business and finance VPF ಎಂದರೇನು? EPF ಕೊಡುಗೆಗಳಿಗಿಂತ ಹೆಚ್ಚಿನ ಲಾಭವಿದೆಯೇ? By kannada.goodreturns.in Published On :: Thu, 30 Apr 2020 13:50:57 +0530 ನಿವೃತ್ತಿಯ ಬಳಿಕ ನಮ್ಮ ಜೀವನ ಯಾರನ್ನೂ ಅವಲಂಬಿಸದೇ ಸ್ವತಂತ್ರವಾಗಿರಬೇಕೆಂದು ಎಲ್ಲರೂ ಇಚ್ಛಿಸುತ್ತಾರೆ. ಇದಕ್ಕಾಗಿ ಹಲವಾರು ಆಯ್ಕೆಗಳಿವೆ. ಮ್ಯೂಚುವಲ್ ಫಂಡ್, ಈಕ್ವಿಟಿ, ಯೂಲಿಪ್, ರಾಷ್ಟ್ರೀಯ ಪಿಂಚಣಿ ಯೋಜನೆ, ಅಂಚೆ ಕಛೇರಿ ಯೋಜನೆಗಳು, PPF, EPF ಭವಿಷ್ಯ ನಿಧಿ ಯೋಜನೆಗಳು ಇತ್ಯಾದಿ. ಸದ್ಯ ಮಾರುಕಟ್ಟೆಯಲ್ಲಿ ಆಗುತ್ತಿರುವ ವೇಗದ ಏರಿಳಿತಗಳು ಭವಿಷ್ಯದ ಚಿಂತೆಯನ್ನು ಹೆಚ್ಚಿಸಿವೆ. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು Full Article
business and finance ಕೊರೊನಾ ಕಷ್ಟ ಕಾಲಕ್ಕೆ ಎಲ್ಲಿ ಲೋನ್ ಸಿಗುತ್ತೆ? ಯಾವ ಬಡ್ಡಿ ಕಡಿಮೆ? By kannada.goodreturns.in Published On :: Fri, 01 May 2020 15:39:06 +0530 ಕೊರೊನಾದಿಂದ ಎದುರಾಗಿರುವ ಆರ್ಥಿಕ ಸಮಸ್ಯೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಹಲವು ಬ್ಯಾಂಕ್ ಗಳು ಈಗಾಗಲೇ ಸಾಲ ಪಡೆದಂಥವರಿಗೆ, ಪೆನ್ಷನ್ ದಾರರಿಗೆ ಹಾಗೂ ವೇತನದಾರರಿಗೆ ಪರ್ಸನಲ್ ಲೋನ್ ಒದಗಿಸುತ್ತಿವೆ. ಕೊರೊನಾ ಲಾಕ್ ಡೌನ್ ನಿಂದ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿರುವವರು ಅದರಿಂದ ಹೊರಬರಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಈ ಸಾಲ ಯೋಜನೆ ರೂಪಿಸಿದೆ. ಉಳಿದ ಅವಧಿಯಲ್ಲಿ, ಅಂದರೆ ಸಾಮಾನ್ಯ ಸಂದರ್ಭದಲ್ಲಿ ತೆಗೆದುಕೊಳ್ಳುತ್ತಿದ್ದ Full Article
business and finance 'ಮಹಾ' ಸರ್ಕಾರದಿಂದ ಪ್ರತಿಯೊಬ್ಬರಿಗೆ ಉಚಿತ ಇನ್ಷೂರೆನ್ಸ್; ಇದು ದೇಶದಲ್ಲೇ ಮೊದಲು By kannada.goodreturns.in Published On :: Sun, 03 May 2020 11:12:49 +0530 ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಯಿಂದ ಮಹಾರಾಷ್ಟ್ರದಲ್ಲಿ ರಚನೆ ಆಗಿರುವ ಸರ್ಕಾರವು ಇಡೀ ದೇಶದಲ್ಲೇ ಮೊದಲು ಎಂಬಂಥ ಯೋಜನೆಯೊಂದನ್ನು ಘೋಷಣೆ ಮಾಡಿದೆ. ಮಹಾರಾಷ್ಟ್ರದ ಎಲ್ಲ ನಾಗರಿಕರಿಗೂ ಉಚಿತ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್ ಘೋಷಣೆ ಮಾಡಿದ್ದಾರೆ ಅಲ್ಲಿನ ಆರೋಗ್ಯ ಸಚಿವ ರಾಜೇಶ್ ಟೋಪೆ. ಅಂದಹಾಗೆ, ಭಾರತದ ರಾಜ್ಯವೊಂದು ಈ ರೀತಿ ಯೋಜನೆ ಘೋಷಣೆ ಮಾಡುತ್ತಿರುವುದು ಇದೇ ಮೊದಲು Full Article
business and finance ಬ್ಯಾಂಕ್ ಗ್ರಾಹಕರ ಗಮನಕ್ಕೆ: ಹಣ ವಿಥ್ ಡ್ರಾ ಮಾಡಲು ಹೊಸ ನಿಯಮ By kannada.goodreturns.in Published On :: Mon, 04 May 2020 14:42:45 +0530 ಜನರು ಬ್ಯಾಂಕ್ ಗಳಿಗೆ ಭೇಟಿ ನೀಡುವ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ನಗದು ವಿಥ್ ಡ್ರಾಗೆ ಹೊಸ ನಿಯಮ ಪರಿಚಯಿಸಿದೆ. ದೇಶಾದ್ಯಂತ ಲಾಕ್ ಡೌನ್ ಇರುವ ಅವಧಿಯಲ್ಲಿ ಈ ನಿಯಮವು ಅನ್ವಯ ಆಗುತ್ತದೆ. ಈಗಿನ ನಡೆಯಿಂದ ಜನಜಂಗುಳಿ ಕಡಿಮೆ ಆಗುತ್ತದೆ. ಎಲೆಕ್ಟ್ರಾನಿಕ್ ವ್ಯವಹಾರಗಳನ್ನು ಹೆಚ್ಚು ಮಾಡುವ ಮೂಲಕ ಒತ್ತಡ ಕಡಿಮೆ ಮಾಡಲು Full Article
business and finance ಮನೆ ಖರೀದಿಗೆ ಇದು ಸೂಕ್ತ ಸಮಯವೇ? ಇದಕ್ಕಾಗಿ ಸಾಲ ಮಾಡಬಹುದಾ? By kannada.goodreturns.in Published On :: Tue, 05 May 2020 19:55:22 +0530 ಇದು ಕೇವಲ ಮೂರ್ನಾಲ್ಕು ತಿಂಗಳ ಹಿಂದಿನ ಮಾತು. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ, ಷೇರು ಮಾರ್ಕೆಟ್ ನಲ್ಲಿ ದಿನವೂ ಭರ್ಜರಿ ಫಸಲು ಕಾಣುತ್ತಿದ್ದ ಸಮಯ. "ಮನೆ- ಸೈಟು ಅಂತ ದುಡ್ಡು ಹಾಕುವ ಬದಲಿಗೆ ಷೇರಿನ ಮೇಲೆ ಹಣ ಹಾಕಿದರೆ ಸಿಕ್ಕಾಪಟ್ಟೆ ಲಾಭ ಮಾಡಬಹುದು. ಅದಕ್ಕೆ ನಾನೇ ಉದಾಹರಣೆ" ಎಂದು ಕೆಲವರು ಬೆನ್ನು ಚಪ್ಪರಿಸಿಕೊಳ್ಳುತ್ತಿದ್ದರು. ಕೊರೊನಾ ಅಟ್ಟಾಡಿಸಿ ಬಂದಿತು Full Article
business and finance ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಿಂದ ರೈತರಿಗೆ ಸಾಲ ಯೋಜನೆ By kannada.goodreturns.in Published On :: Thu, 07 May 2020 14:30:50 +0530 ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಿಂದ (ಕೆ.ವಿ.ಜಿ.ಬಿ) ರೈತರಿಗೆ ಗರಿಷ್ಠ 50,000 ಸಾವಿರ ರುಪಾಯಿ ಸಾಲ ನೀಡಲಾಗುತ್ತಿದೆ. ಅನಿರೀಕ್ಷಿತವಾಗಿ ಉದ್ಭವಿಸುವ ಖರ್ಚುಗಳನ್ನು ಭರಿಸುವ ಸಲುವಾಗಿ ಈ ಯೋಜನೆ ತರಲಾಗಿದೆ. ಅಂದಹಾಗೆ ಕೆವಿಜಿಬಿ ಮುಖ್ಯ ಕಚೇರಿಯು ಧಾರವಾಡದಲ್ಲಿದ್ದು, ರೈತರ ತುರ್ತಿಗಾಗಿಯೇ ಈ ಸಾಲ ಯೋಜನೆ ಪರಿಚಯಿಸಿದೆ. ಬ್ಯಾಂಕ್ ನ ಅಧ್ಯಕ್ಷರಾದ ಗೋಪಿ ಕೃಷ್ಣ ಬುಧವಾರ ಪತ್ರಿಕಾಹೇಳಿಕೆಯಲ್ಲಿ ಈ ವಿಚಾರವನ್ನು Full Article
business and finance ಐಡಿಬಿಐ ಫೆಡರಲ್ ಲೈಫ್ ಇನ್ಷೂರೆನ್ಸ್ ಗ್ಯಾರಂಟೀಡ್ ವೆಲ್ತ್ ಪ್ಲ್ಯಾನ್ ನಿಮಗೆಷ್ಟು ಗೊತ್ತು? By kannada.goodreturns.in Published On :: Thu, 07 May 2020 20:02:00 +0530 ಷೇರು ಮಾರ್ಕೆಟ್ ನಲ್ಲಿ ಇತ್ತೀಚೆಗೆ ಏರಿಳಿತ ಕಂಡಿರುವ ಹೂಡಿಕೆದಾರರು ಅದರ ಬಗ್ಗೆ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದಾರೆ. ಯಾರಿಗೆ ತಮ್ಮ ಹೂಡಿಕೆಯಿಂದ ಗ್ಯಾರಂಟಿ ರಿಟರ್ನ್ ಬೇಕೋ ಅಂಥವರು ಲೈಫ್ ಇನ್ಷೂರೆನ್ಸ್ ಕಂಪೆನಿಗಳ ಕಡೆಗೆ ನೋಡಬಹುದು. ಈ ರೀತಿ ರಿಟರ್ನ್ಸ್ ಖಾತ್ರಿ ನೀಡುವ ಪ್ಲ್ಯಾನ್ ಗಳಲ್ಲಿ ಪ್ರಮಾಣ ಕಡಿಮೆ ಇರಬಹುದು. ಆದರೆ ಹೂಡಿಕೆದಾರರ ಬಂಡವಾಳದ ಮೇಲೆ ಷೇರು ಮಾರ್ಕೆಟ್ ನ ಚಲನೆ Full Article
business and finance ಹುಂಡೈ ಕಾರು ಖರೀದಿಸುವವರಿಗೆ ಹೊರೆಯಾಗದಂತೆ 5 ಹೊಸ ಸಾಲ ಯೋಜನೆ By kannada.goodreturns.in Published On :: Fri, 08 May 2020 18:15:23 +0530 ಕೊರೊನಾ ಪ್ರಭಾವದಿಂದ ನಾನಾ ವಲಯಗಳ ವ್ಯವಹಾರಗಳು ನಲುಗಿಹೋಗಿವೆ. ಇಂಥ ಸನ್ನಿವೇಶದಲ್ಲಿ ಹುಂಡೈ ಮೋಟಾರ್ ಇಂಡಿಯಾವು "Click-to-Buy" ಆನ್ ಲೈನ್ ಮಾರಾಟ ಪ್ಲಾಟ್ ಫಾರ್ಮ್ ಘೋಷಣೆ ಮಾಡಿದೆ. ಅದರ ಮೂಲಕವೇ ಯಾರಾದರೂ, ಹುಂಡೈ ಕಾರಿನ ಯಾವುದಾದರೂ ಮಾಡೆಲ್ ಬುಕ್ ಮಾಡಬಹುದು ಹಾಗೂ ಖರೀದಿ ಮಾಡಬಹುದು. ಇದರ ಜತೆಗೆ ಮಾರಾಟದ ನಂತರ 360 ಡಿಜಿಟಲ್ ಸರ್ವೀಸ್ ಮತ್ತು ಕಾಂಟ್ಯಾಕ್ಟ್ ಲೆಸ್ Full Article
business and finance ಸವರನ್ ಗೋಲ್ಡ್ ಬಾಂಡ್ ಬೆಲೆ ಪ್ರತಿ ಗ್ರಾಮ್ ಗೆ 4,590 ರು.ಗೆ ನಿಗದಿ By kannada.goodreturns.in Published On :: Fri, 08 May 2020 22:55:37 +0530 ಮೇ 11, 2020ರಿಂದ ಮೇ 15, 2020ರ ಮಧ್ಯೆ ವಿತರಿಸುವ ಸವರನ್ ಗೋಲ್ಡ್ ಬಾಂಡ್ ಬೆಲೆಯನ್ನು ಪ್ರತಿ ಗ್ರಾಮ್ ಗೆ 4,590 ರುಪಾಯಿಗೆ ನಿಗದಿ ಮಾಡಲಾಗಿದೆ ಎಂದು ಶುಕ್ರವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸವರನ್ ಗೋಲ್ಡ್ ಬಾಂಡ್ 2020- 21ರ ಸರಣಿ || ಇದೇ ತಿಂಗಳ 11ರಿಂದ 15ರ ಮಧ್ಯೆ ಲಭ್ಯವಿದೆ. Full Article
business and finance ಐತಿಹಾಸಿಕ ಆರ್ಥಿಕ ಕುಸಿತದತ್ತ ಯುರೋಪಿಯನ್ ಒಕ್ಕೂಟ; 27 ದೇಶಗಳಲ್ಲಿ ತಲ್ಲಣ By kannada.goodreturns.in Published On :: Wed, 06 May 2020 21:35:37 +0530 ಈ ವರ್ಷ ಐತಿಹಾಸಿಕ ಪ್ರಮಾಣದ ಆರ್ಥಿಕ ಕುಸಿತ ಸಂಭವಿಸಲಿದೆ ಎಂದು ಬುಧವಾರ ಯುರೋಪಿಯನ್ ಒಕ್ಕೂಟ ತಿಳಿಸಿದೆ. ಕೊರೊನಾ ಪರಿಣಾಮದಿಂದ ಉತ್ಪಾದನೆ 7 ಪರ್ಸೆಂಟ್ ಗಿಂತಲೂ ಹೆಚ್ಚು ಇಳಿಕೆಯಾಗಿದೆ ಎಂದು ಹೇಳುವ ಮೂಲಕ ಇದೇ ಮೊದಲ ಬಾರಿಗೆ ಜಾಗತಿಕ ಪಿಡುಗಿನ ಆರ್ಥಿಕ ಪರಿಣಾಮದ ಬಗ್ಗೆ ತಿಳಿಸಲಾಗಿದೆ. ಯುರೋಪಿಯನ್ ಒಕ್ಕೂಟದಲ್ಲಿ ಒಟ್ಟು 27 ದೇಶಗಳಿವೆ. 2021ರಲ್ಲಿ 6 ಪರ್ಸೆಂಟ್ ನಷ್ಟು Full Article
business and finance 24.5 ಪರ್ಸೆಂಟ್ ಸಿಬ್ಬಂದಿಗೆ ಏಪ್ರಿಲ್ ವೇತನವೇ ಆಗಿಲ್ಲ: ಸಮೀಕ್ಷೆ ತೆರೆದಿಟ್ಟ ಲೆಕ್ಕಾಚಾರ By kannada.goodreturns.in Published On :: Wed, 06 May 2020 22:33:26 +0530 ಐ.ಟಿ., ಉತ್ಪಾದನಾ ಕಂಪೆನಿಗಳೂ ಸೇರಿದಂತೆ ಹಲವು ಉದ್ಯಮ ನಡೆಸುವವರಿಗೆ ಉದ್ಯೋಗಿಗಳಿಗೆ ಏಪ್ರಿಲ್ ನಲ್ಲಿ ಸಂಬಳ ನೀಡಲು ಸಹ ಸಾಧ್ಯವಾಗಿಲ್ಲ. ಕೊರೊನಾದ ಕಾರಣಕ್ಕೆ ಭಾರತದಾದ್ಯಂತ ಲಾಕ್ ಡೌನ್ ಘೋಷಣೆಯಾಗಿದೆ. ಮಾರ್ಚ್ ತಿಂಗಳ ವೇತನವನ್ನು 13.3 ಪರ್ಸೆಂಟ್ ನಷ್ಟು ಕಂಪೆನಿಗಳಿಗೆ ನೀಡಲು ಸಾಧ್ಯವಾಗಿರಲಿಲ್ಲ. ಈ ಪ್ರಮಾಣ ಏಪ್ರಿಲ್ ತಿಂಗಳ ಸಂಬಳದ ಹೊತ್ತಿಗೆ 24.5 ಪರ್ಸೆಂಟ್ ಗೆ ಏರಿಕೆ ಆಗಿದೆ ಎಂದು Full Article
business and finance 2020ನೇ ಸಾಲಿನ ಫೋರ್ಬ್ಸ್ ಭಾರತೀಯ ಶ್ರೀಮಂತರ ಪಟ್ಟಿ ರಿಲೀಸ್: ಮುಕೇಶ್ ಅಂಬಾನಿಗೆ ಮೊದಲ ಸ್ಥಾನ By kannada.goodreturns.in Published On :: Thu, 07 May 2020 09:19:24 +0530 2020ನೇ ಸಾಲಿನ ಫೋರ್ಬ್ಸ್ ಭಾರತೀಯ ಸಿರಿವಂತರ ಪಟ್ಟಿ ಪ್ರಕಟವಾಗಿದ್ದು, ಮತ್ತೊಮ್ಮೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಮುಖ್ಯಸ್ಥ ಮುಕೇಶ್ ಅಂಬಾನಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಡಿ-ಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿ ಇದ್ದಾರೆ. ಕೊರೊನಾವೈರಸ್ದಿಂದಾಗಿ ಜಾಗತಿಕವಾಗಿ ಆರ್ಥಿಕ ಹೊಡೆದದ ಜೊತೆಗೆ ಭಾರತದ ಬಿಲಿಯನೇರ್ಗಳ ಸಂಖ್ಯೆಯನ್ನು ತಗ್ಗಿಸಿದೆ. 2019ರಲ್ಲಿ 106 ಬಿಲಿಯನೇರ್ಗಳು ಭಾರತದಲ್ಲಿದ್ದರೂ, ಆದರೆ ಈ ಸಂಖ್ಯೆಯು 102ಕ್ಕೆ ಇಳಿಕೆಯಾಗಿದೆ. Full Article
business and finance SBI ತುರ್ತು ಸಾಲ ಯೋಜನೆ:ಕೇವಲ 45 ನಿಮಿಷದಲ್ಲಿ 5 ಲಕ್ಷ ರು. ನಿಮ್ಮ ಅಕೌಂಟ್ಗೆ! By kannada.goodreturns.in Published On :: Thu, 07 May 2020 13:28:06 +0530 ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ 'ಎಸ್ಬಿಐ ತುರ್ತು ಸಾಲ ಯೋಜನೆ' ಅಡಿಯಲ್ಲಿ ತನ್ನ ಗ್ರಾಹಕರಿಗೆ ಕೇವಲ 45 ನಿಮಿಷಗಳಲ್ಲಿ 5 ಲಕ್ಷ ರುಪಾಯಿವರೆಗೆ ಸಾಲವನ್ನು ನೀಡಲಿದೆ. Full Article
business and finance ವಿಶಾಖಪಟ್ಟಣದ LG Polymers ಕಂಪೆನಿ ಬಗ್ಗೆ ನಿಮಗೆಷ್ಟು ಗೊತ್ತು? By kannada.goodreturns.in Published On :: Thu, 07 May 2020 15:45:15 +0530 ವಿಶಾಖಪಟ್ಟಣದಲ್ಲಿ ಗುರುವಾರದ ಅನಿಲ ಸೋರಿಕೆ ಘಟನೆಯು ಕನಿಷ್ಠ ಎಂಟು ಮಂದಿಯ ಪ್ರಾಣ ತೆಗೆದಿದೆ. ನೂರಾರು ಮಂದಿ ಅಸ್ವಸ್ಥರಾಗಿದ್ದಾರೆ. ಈ ಘಟನೆಯ ಮೂಲ ಇರುವುದು ಎಲ್.ಜಿ. ಪಾಲಿಮರ್ಸ್ ಒಡೆತನದ ಕಾರ್ಖಾನೆಯಲ್ಲಿ. ಪ್ಲಾಸ್ಟಿಕ್ ರಿಸಿನ್ ಮತ್ತು ಸಿಂಥೆಟಿಕ್ ಫೈಬರ್ ಉತ್ಪಾದನೆ ಮಾಡುವ ಕೈಗಾರಿಕೆಯ ಒಂದು ಭಾಗವಷ್ಟೇ ಈ ಘಟಕ. ಇನ್ನು ಇದರ ಮಾಲೀಕತ್ವ ಯಾರದು ಅಂತ ನೋಡಿದರೆ, ದಕ್ಷಿಣ ಕೊರಿಯಾದ Full Article
business and finance ಏರುತ್ತಲೇ ಸಾಗಿದ ಚಿನ್ನದ ಬೆಲೆ: ಮೇ 07ರ ದರ ಹೀಗಿದೆ By kannada.goodreturns.in Published On :: Thu, 07 May 2020 16:51:54 +0530 ಹಳದಿ ಲೋಹದ ಬೆಲೆಯು ಮತ್ತಷ್ಟು ಏರಿಕೆಯತ್ತ ಮುಖಮಾಡಿದೆ. ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂ 43,110 ರುಪಾಯಿ ದಾಖಲಾಗಿದೆ. ಶುದ್ಧ ಚಿನ್ನವು 10ಗ್ರಾಂ 46,080 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 42,050 ರುಪಾಯಿ ಮುಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ Full Article
business and finance ಲಾಕ್ಡೌನ್ ಎಫೆಕ್ಟ್: ಉಬರ್ನ 3,700 ಜನರ ಉದ್ಯೋಗಕ್ಕೆ ಕುತ್ತು By kannada.goodreturns.in Published On :: Thu, 07 May 2020 18:10:24 +0530 ಕೊರೊನಾವೈರಸ್ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಲಾಕ್ಡೌನ್ ಜನರ ಬದುಕಿನ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದಿನೇ ದಿನೇ ಕೆಲಸ ಕಳೆದುಕೊಳ್ಳುವವರ ಸಂಖ್ಯೆಯು ಬೆಳೆಯುತ್ತಲೇ ಇದೆ. ಇದರ ಜೊತೆಗೆ ವಿಶ್ವದ ಅತಿದೊಡ್ಡ ಕ್ಯಾಬ್ ಸೇವಾ ಕಂಪನಿ ಉಬರ್ ಕೂಡ ಭಾರೀ ಆಘಾತ ಅನುಭವಿಸಿದೆ. ವಿಶ್ವದ ಅನೇಕ ಕಂಪನಿಗಳು ಹಣಕಾಸಿನ ಮುಗ್ಗಟ್ಟಿನಿಂದಾಗಿ ದಿವಾಳಿಯೆಂದು ಘೋಷಿಸುತ್ತಿವೆ. ಇದರ ಜೊತೆಗೆ ಉಬರ್ Full Article
business and finance ಕರ್ನಾಟಕದಲ್ಲಿರುವ ವಲಸಿಗ ಕಾರ್ಮಿಕರಿಗಾಗಿ ಮೇ 8ರಿಂದ ನಿತ್ಯವೂ ರೈಲು By kannada.goodreturns.in Published On :: Thu, 07 May 2020 18:54:44 +0530 ಕೊರೊನಾ ಲಾಕ್ ಡೌನ್ ನಿಂದಾಗಿ ಕರ್ನಾಟಕದಲ್ಲಿ ಸಿಲುಕಿಕೊಂಡಿರುವ ವಲಸಿಗ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ವಾಪಸ್ ಕಳುಹಿಸುವ ನಿಟ್ಟಿನಲ್ಲಿ ರೈಲು ಸೇವೆ ಪುನರಾರಂಭಿಸುವುದಾಗಿ ಗುರುವಾರ ತಿಳಿಸಲಾಗಿದೆ. ಬಿಲ್ಡರ್ಸ್ ಗಳ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಾರ್ಮಿಕರನ್ನು ಬಲವಂತವಾಗಿ ಇರುವಂತೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ್ ಅವರು ಗುರುವಾರದಂದು ವಿವಿಧ Full Article
business and finance ಭಾರತದ ಐಟಿ ವಲಯ ಹಿಂದಿಗಿಂತಲೂ ಬಲಿಷ್ಟವಾಗಲಿದೆ: ಕ್ರಿಸ್ ಗೋಪಾಲಕೃಷ್ಣನ್ By kannada.goodreturns.in Published On :: Thu, 07 May 2020 20:18:04 +0530 ಕೊರೊನಾವೈರಸ್ ವಿಶ್ವದಾದ್ಯಂತ ಆರ್ಥಿಕ ವ್ಯವಸ್ಥೆಯ ಮೇಲೆ ಭಾರೀ ಪರಿಣಾಮ ಬೀರಿದ್ದು, ಬಲಿಷ್ಟ ಅರ್ಥವ್ಯವಸ್ಥೆಗಳೇ ತತ್ತರಿಸಿ ಹೋಗಿವೆ. ಆದರೆ ಈ ಎಲ್ಲಾ ಸಮಸ್ಯೆಗಳು ಮುಗಿದ ಮೇಲೆ ಭಾರತದ ಐಟಿ ವಲಯ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ, ಆಕ್ಸಿಲರ್ ವೆಂಚುರ್ಸ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಹೇಳಿದ್ದಾರೆ. ಸದ್ಯ ಎಲ್ಲಾ ಉದ್ಯಮಗಳ ಮೇಲೆ ಲಾಕ್ಡೌನ್ ಪರಿಣಾಮ ಬೀರಿದ್ದು, ಐಟಿ Full Article
business and finance SBIನಿಂದ ಗೃಹ ಸಾಲದ ಮೇಲಿನ ಬಡ್ಡಿ ದರ ಇನ್ನಷ್ಟು ಕಡಿಮೆ By kannada.goodreturns.in Published On :: Thu, 07 May 2020 20:48:58 +0530 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಗುರುವಾರದಂದು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಗ್ ರೇಟ್ (MCLR) ಅನ್ನು 15 ಬೇಸಿಸ್ ಪಾಯಿಂಟ್ (bps) ಕಡಿಮೆ ಮಾಡಿದೆ. ಇದು ಎಲ್ಲ ಅವಧಿಯ ಸಾಲಕ್ಕೂ ಅನ್ವಯ ಆಗುತ್ತದೆ. ಹೀಗೆ ಎಂಸಿಎಲ್ ಆರ್ ಇಳಿಕೆ ಮಾಡಿರುವುದರಿಂದ ಸಾಲ ನೀಡುವ ದರವು ಈ ವರೆಗೆ ವಾರ್ಷಿಕ 7.40 ಪರ್ಸೆಂಟ್ ಇದ್ದದ್ದು 7.25 Full Article
business and finance ಏಷ್ಯನ್ ಪೇಂಟ್ಸ್ ಕಂಪೆನಿಯಲ್ಲಿನ ಪಾಲು ಮಾರಲಿದೆಯಾ ರಿಲಯನ್ಸ್? By kannada.goodreturns.in Published On :: Thu, 07 May 2020 22:43:38 +0530 ಭಾರತದ ಅತಿ ದೊಡ್ಡ ಪೇಂಟ್ ತಯಾರಕ ಕಂಪೆನಿ ಏಷ್ಯನ್ ಪೇಂಟ್ಸ್ ನಲ್ಲಿ ಇರುವ ರಿಲಯನ್ಸ್ ಇಂಡಸ್ಟ್ರಿ ಪಾಲನ್ನು ಮಾರಾಟ ಮಾಡಲು ಮುಂದಾಗಿದೆ. ಈ ಷೇರಿನ ಮೌಲ್ಯವು 7500 ಕೋಟಿ ರುಪಾಯಿಯಷ್ಟು ಎಂದು ಅಂದಾಜು ಮಾಡಲಾಗಿದ್ದು, ರಿಲಯನ್ಸ್ ತನ್ನ ಸಾಲವನ್ನು ತೀರಿಸಲು ಈ ಹಣವನ್ನು ಬಳಸಲಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಮೂಲಗಳು ತಿಳಿಸಿವೆ. ಏಷ್ಯನ್ Full Article
business and finance ಫೇಸ್ಬುಕ್, ಸಿಲ್ವರ್ ಲೇಕ್ ಬಳಿಕ ಮತ್ತೊಂದು ಕಂಪನಿ ಜಿಯೋದಲ್ಲಿ ಹಣ ಹೂಡಿಕೆ By kannada.goodreturns.in Published On :: Fri, 08 May 2020 09:34:26 +0530 ಖಾಸಗಿ ಇಕ್ವಿಟಿ ಸಂಸ್ಥೆಯಾದ ವಿಸ್ಟಾ ಈಕ್ವಿಟಿ ಪಾರ್ಟ್ನರ್ಸ್ ಜಿಯೋದಲ್ಲಿ 11,367 ಕೋಟಿ ರುಪಾಯಿ ಹೂಡಿಕೆ ಮಾಡಲು ಯೋಜಿಸಿದ್ದು, 2.32 ಪರ್ಸೆಂಟ್ ಪಾಲನ್ನು ಪಡೆಯಲು ಮುಂದಾಗಿದೆ. ಕಳೆದ ಎರಡು ವಾರಗಳಲ್ಲಿ ಫೇಸ್ಬುಕ್ ಮತ್ತು ಸಿಲ್ವರ್ ಲೇಕ್ನ ಹೂಡಿಕೆಯ ಬಳಿಕ ಇದು ಜಿಯೋ ಪ್ಲಾಟ್ಫಾರ್ಮ್ಗಳ ಮೂರನೇ ಒಪ್ಪಂದವಾಗಿದೆ. Full Article
business and finance 18 ವರ್ಷದ ಮುಂಬೈ ಹುಡುಗನ ಬಿಜಿನೆಸ್ಗೆ ಕೈ ಜೋಡಿಸಿದ ರತನ್ ಟಾಟಾ By kannada.goodreturns.in Published On :: Fri, 08 May 2020 12:08:29 +0530 ಹೊಸ ಹೊಸ ಸ್ಟಾರ್ಟ್ ಅಪ್ಗಳಿಗೆ ಹಣ ಹೂಡಿಕೆ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿರುವ ರತನ್ ಟಾಟಾ, ಇದೀಗ ಮುಂಬೈ ಮೂಲದ 18 ವರ್ಷದ ವಿದ್ಯಾರ್ಥಿಯ ಸ್ಟಾರ್ಟ್ ಅಪ್ ಬಿಜಿನೆಸ್ಗೆ ಹಣ ಹೂಡಿಕೆ ಮಾಡಿದ್ದಾರೆ. Full Article
business and finance LG ಪಾಲಿಮರ್ಸ್ ಕಂಪೆನಿಗೆ 50 ಕೋಟಿ ಠೇವಣಿ ಇಡುವಂತೆ NGT ಸೂಚನೆ By kannada.goodreturns.in Published On :: Fri, 08 May 2020 16:02:13 +0530 ವಿಶಾಖಪಟ್ಟಣದಲ್ಲಿ ನಡೆದ ವಿಷಾನಿಲ ಸೋರಿಕೆ ದುರಂತದಲ್ಲಿ ಹನ್ನೊಂದು ಮಂದಿ ಸಾವನ್ನಪ್ಪಿದ್ದು, ಎಲ್.ಜಿ. ಪಾಲಿಮರ್ಸ್ ಪ್ರೈವೇಟ್ ಲಿಮಿಟೆಡ್ ಗೆ ಆರಂಭಿಕ ಮೊತ್ತವಾಗಿ 50 ಕೋಟಿ ರುಪಾಯಿ ಠೇವಣಿ ಮೊತ್ತವನ್ನು ಕಟ್ಟುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್ ಜಿಟಿ) ಆದೇಶ ನೀಡಿದೆ. ಈ ಘಟನೆಯು ಗುರುವಾರ ಬೆಳಗಿನ ಜಾವ 3.30ರ ಹೊತ್ತಿಗೆ ಸಂಭವಿಸಿದೆ. ಆ ವೇಳೆ ನೂರಾರು ಮಂದಿ ಹತ್ತಿರದ Full Article
business and finance ಚಿನ್ನದ ಬೆಲೆ ಮತ್ತಷ್ಟು ಏರಿಕೆ : ದೇಶದ ಪ್ರಮುಖ ನಗರಗಳ ದರ ಇಲ್ಲಿದೆ By kannada.goodreturns.in Published On :: Fri, 08 May 2020 16:48:02 +0530 ಹಳದಿ ಲೋಹದ ಬೆಲೆಯು ದಿನೇ ದಿನೇ ಗಗನಕ್ಕೇರುತ್ತಿದೆ. ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 43,300 ರುಪಾಯಿ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 46,270 ರುಪಾಯಿಗೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,450 ರುಪಾಯಿ ಏರಿಕೆಗೊಂಡು 43,500 ರುಪಾಯಿ ದಾಖಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ Full Article
business and finance ಕೊರೊನಾ ಎಫೆಕ್ಟ್: ಈತನೇ ಜಗತ್ತಿನಲ್ಲಿ ಅತಿ ಹೆಚ್ಚು ಹಣ ಕಳೆದುಕೊಂಡಿದ್ದು! By kannada.goodreturns.in Published On :: Fri, 08 May 2020 17:45:09 +0530 ಕೊರೊನಾವೈರಸ್ದಿಂದ ಅನೇಕ ದೇಶದ ಆರ್ಥಿಕ ವ್ಯವಸ್ಥೆಗಳು ತಲೆಕೆಳಗಾಗಿವೆ. ಎಷ್ಟೋ ಸಂಸ್ಥೆಗಳು ಮುಚ್ಚಿ ಹೋಗಿವೆ. ಅನೇಕ ಕಂಪನಿಗಳು ದಿವಾಳಿ ಘೋಷಿಸಿವೆ. ಕೋಟ್ಯಾಂತರ ಸಂಖ್ಯೆಯಲ್ಲಿ ಜನರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಕೊರೊನಾ ಎಫೆಕ್ಟ್ ವಿಶ್ವದ ಯಾರನ್ನೂ ಬಿಡದೆ ಬೆಂಬಿಡದೆ ಕಾಡಿದೆ. ಹೀಗಿರುವಾಗ ಇದರಿಂದ ಯಾವೊಬ್ಬ ಉದ್ಯಮಿಯು ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೆಸರಾಂತ ಬಿಲಿಯನೇರ್ಗಳೇ ಸಾವಿರಾರು ಕೋಟಿ ರುಪಾಯಿ ಕಳೆದುಕೊಂಡಿದ್ದಾರೆ. ಹೀಗಿರುವಾಗ ವಿಶ್ವದಲ್ಲೇ ಅತಿ Full Article
business and finance ರಿಲಯನ್ಸ್ ಜಿಯೋದಿಂದ ಹೊಸ ಪ್ರೀಪೇಯ್ಡ್ ಪ್ಲಾನ್ By kannada.goodreturns.in Published On :: Fri, 08 May 2020 18:56:58 +0530 ರಿಲಯನ್ಸ್ ಜಿಯೋದಿಂದ ಹೊಸದಾಗಿ ವರ್ಕ್ ಫ್ರಮ್ ಹೋಮ್ ಪ್ಲಾನ್ ಆರಂಭಿಸಿದೆ. ಕೆಲಸ ಹಾಗೂ ಮತ್ತಿತರ ಕಾರಣಗಳಿಗಾಗಿ ಇರುವ ಡೇಟಾದ ಬೇಡಿಕೆ ಗಮನಿಸಿ ಈ ಪ್ಲಾನ್ ಶುರು ಮಾಡಲಾಗಿದೆ. ಇದು ಒಂದು ವರ್ಷದ ಅವಧಿಗೆ ಇರುವಂಥ, ಹೆಚ್ಚಿನ ಡೇಟಾವನ್ನು ದಿನದ ಆಧಾರದಲ್ಲಿ ಪಡೆಯುವಂಥ ಅನುಕೂಲ ಹೊಂದಿದೆ. ಈ ಹೊಸ ಪ್ಲಾನ್ ನಲ್ಲಿ ಗ್ರಾಹಕರು 2399 ರುಪಾಯಿ ಪಾವತಿ ಮಾಡುತ್ತಾರೆ. Full Article
business and finance ವರ್ಷಾಂತ್ಯದವರೆಗೂ ಫೇಸ್ಬುಕ್, ಗೂಗಲ್ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಸೌಲಭ್ಯ By kannada.goodreturns.in Published On :: Fri, 08 May 2020 19:05:35 +0530 ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಹಾಗೂ ಗೂಗಲ್ ಸಂಸ್ಥೆಯು ತಮ್ಮ ಹೆಚ್ಚಿನ ಉದ್ಯೋಗಿಗಳಿಗೆ ಈ ವರ್ಷಾಂತ್ಯದವರೆಗೂ ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಮ್) ಮಾಡುವ ಅವಕಾಶ ನೀಡಲು ಮುಂದಾಗಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ಏಪ್ರಿಲ್ನಲ್ಲಿ ತನ್ನ ಹೆಚ್ಚಿನ ಉದ್ಯೋಗಿಗಳು ಮೇ ಅಂತ್ಯದವರೆಗೆ ದೂರದಿಂದಲೇ ಕೆಲಸ ಮಾಡುವ ಅಗತ್ಯವಿರುತ್ತದೆ ಎಂದು Full Article
business and finance ಲಾಕ್ಡೌನ್ ಎಫೆಕ್ಟ್: ಇಂಡಿಗೋ ಹಿರಿಯ ಉದ್ಯೋಗಿಗಳ ವೇತನ ಕಡಿತ By kannada.goodreturns.in Published On :: Fri, 08 May 2020 19:51:55 +0530 ಭಾರತದ ಅತಿದೊಡ್ಡ ದೇಶೀಯ ವಿಮಾನಯಾನ ಸಂಸ್ಥೆ ಇಂಡಿಗೋ ಮೇ ತಿಂಗಳಿನಿಂದ ಹಿರಿಯ ಸಿಬ್ಬಂದಿಗೆ ವೇತನ ಕಡಿತವನ್ನು ಜಾರಿಗೆ ತರುವುದರ ಜೊತೆಗೆ ನೌಕರರಿಗೆ ವೇತನ ರಹಿತ ರಜೆಯನ್ನು ಜುಲೈ ವರೆಗೆ ಹಸ್ತಾಂತರಿಸುವುದರ ಜೊತೆಗೆ ವೆಚ್ಚವನ್ನು ಕಡಿಮೆ ಮಾಡಲು ಮುಂದಾಗಿದೆ. ಕಳೆದ ತಿಂಗಳು ವಿಮಾನಯಾನ ವೇತನ ಕಡಿತವನ್ನು ಹಿಂದಕ್ಕೆ ತಂದ ನಂತರ ಈಗ ಈ ನಿರ್ಧಾರಕ್ಕೆ ಬಂದಿದೆ. ಇಂಡಿಗೋದ ಮುಖ್ಯ Full Article
business and finance INR- USD ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಗೆ ಚಾಲನೆ; ಇದರಿಂದ ಏನೆಲ್ಲ ಲಾಭ? By kannada.goodreturns.in Published On :: Fri, 08 May 2020 20:55:14 +0530 ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು INR- USD ಫ್ಯೂಚರ್ಸ್ ಅಂಡ್ ಆಪ್ಷನ್ಸ್ (F&O) ಕಾಂಟ್ರ್ಯಾಕ್ಟ್ ಗಳಿಗೆ ಎರಡು ಅಂತರರಾಷ್ಟ್ರೀಯ ಎಕ್ಸ್ ಚೇಂಜ್ ಗಳಲ್ಲಿ ಚಾಲನೆ ನೀಡಿದ್ದಾರೆ. ಬಿಎಸ್ ಇ ಇಂಡಿಯಾದ INX ಹಾಗೂ NSEಯ NSE- IFSCಗೆ ಗುಜರಾತ್ ನ ಗಾಂಧೀನಗರದಲ್ಲಿ ಇರುವ GIFT (ಇಂಟರ್ ನ್ಯಾಷನಲ್ ಫೈನಾನ್ಷಿಯಲ್ ಸರ್ವೀಸಸ್ ಸೆಂಟರ್)ನಲ್ಲಿ ವಿಡಿಯೋ ಕಾನ್ಫರೆನ್ಸ್ Full Article
business and finance 12 ಲಕ್ಷ ಕೋಟಿ ರುಪಾಯಿ ಸಾಲ ಮಾಡಲಿದೆ ಕೇಂದ್ರ ಸರ್ಕಾರ By kannada.goodreturns.in Published On :: Fri, 08 May 2020 21:45:04 +0530 ಕೊರೊನಾವನ್ನು ನಿಯಂತ್ರಣದಲ್ಲಿ ಇಡಲು ದೇಶದಾದ್ಯಂತ ಲಾಕ್ ಡೌನ್ ಮಾಡಿರುವುದು ಆರ್ಥಿಕ ಬಿಕ್ಕಟ್ಟು ಉದ್ಭವಿಸುವಂತೆ ಮಾಡಿದೆ. ಆ ಹಿನ್ನೆಲೆಯಲ್ಲೇ ಈ ವರ್ಷ ಕೇಂದ್ರ ಸರ್ಕಾರವು 12 ಲಕ್ಷ ಕೋಟಿ ರುಪಾಯಿ ಸಾಲ ಮಾಡಲಿದೆ. ಈ ಹಿಂದೆ ಅಂದಾಜು ಸಾಲದ ಪ್ರಮಾಣ 7.8 ಲಕ್ಷ ಕೋಟಿ ರುಪಾಯಿ ಇತ್ತು. ಕೊರೊನಾದ ಕಾರಣಕ್ಕೆ ಸಾಲ ಪ್ರಮಾಣವನ್ನು ಪರಿಷ್ಕರಣೆ ಮಾಡಿದ್ದು, ಸರ್ಕಾರಿ ಬಾಂಡ್ Full Article
business and finance ಅಬಕಾರಿ ಸುಂಕವನ್ನು 25 ಪರ್ಸೆಂಟ್ ಹೆಚ್ಚಿಸಲು ಅಸ್ಸಾಂ ಸರ್ಕಾರ ನಿರ್ಧಾರ By kannada.goodreturns.in Published On :: Sat, 09 May 2020 09:04:23 +0530 ಭಾರತದಲ್ಲಿ ತಯಾರಾದ ವಿದೇಶಿ ಲಿಕ್ಕರ್ (ಐಎಂಎಫ್ಎಲ್) ಮೇಲಿನ ಅಬಕಾರಿ ಸುಂಕವನ್ನು 25 ಪರ್ಸೆಂಟ್ ಹೆಚ್ಚಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಕೊರೊನಾವೈರಸ್ ಬಿಕ್ಕಟ್ಟಿನಿಂದ ಉಂಟಾಗಿರುವ ಅನಿರೀಕ್ಷಿತ ಆರ್ಥಿಕ ಹೊರೆ ಮತ್ತು ವೆಚ್ಚವನ್ನು ಪೂರೈಸಲು ರಾಜ್ಯ ಸರ್ಕಾರ ಅಬಕಾರಿ ಸುಂಕವನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದು ರಾಜ್ಯ ಕೈಗಾರಿಕಾ ಸಚಿವ ಚಂದ್ರ ಮೋಹನ್ ಪಟೋವರಿ ಶುಕ್ರವಾರ ನಡೆದ ಕ್ಯಾಬಿನೆಟ್ ಸಭೆಯ ನಂತರ Full Article
business and finance ದೇಶದಲ್ಲಿ ಒಂದೊಂದೇ ಕೈಗಾರಿಕೆಗಳು ಶುರುವಾಗುತ್ತಿವೆ, ಆದರೆ ಕಾರ್ಮಿಕರೇ ಇಲ್ಲ! By kannada.goodreturns.in Published On :: Sat, 09 May 2020 10:36:34 +0530 ಕೊರೊನಾವೈರಸ್ ಸೋಂಕು ತಡೆಗಟ್ಟಲು ಲಾಕ್ಡೌನ್ದಿಂದಾಗಿ ದೇಶದ ಎಲ್ಲಾ ಉದ್ಯಮಗಳು ಬಂದ್ ಆಗಿದ್ದವು, ಆದರೆ ಸ್ವಲ್ಪ ವಿನಾಯಿತಿ ಸಿಕ್ಕ ಬಳಿಕ ದೇಶದಲ್ಲಿ ಒಂದೊಂದೇ ಉದ್ಯಮಗಳು ಪ್ರಾರಂಭವಾಗುತ್ತಿವೆ. ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳು ಪುನಾರಂಭಗೊಳ್ಳುತ್ತಿವೆ. ಆದರೆ ಸವಾಲುಗಳ ಸರಮಾಲೆಯೇ ಕೈಗಾರಿಕೆಗಳ ಮುಂದಿವೆ. Full Article
business and finance ಅಮೆರಿಕಾದಲ್ಲಿ ನಿರುದ್ಯೋಗ ಹೆಚ್ಚಳ: H-1B ವೀಸಾಗಳ ತಾತ್ಕಾಲಿಕ ನಿಷೇಧ ಸಾಧ್ಯತೆ By kannada.goodreturns.in Published On :: Sat, 09 May 2020 11:56:46 +0530 ಮಹಾಮಾರಿ ಕೊರೊನಾವೈರಸ್ ಹರಡುವಿಕೆಯಿಂದ ದೇಶದಲ್ಲಿ ತಲೆದೋರಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಅಮೆರಿಕಾ ಅತ್ಯಂತ ಜನಪ್ರಿಯವಾಗಿರುವ H-1B ವೀಸಾಗಳಂತಹ ಕೆಲವು ಕೆಲಸದ ಆಧಾರಿತ ವೀಸಾಗಳ ವಿತರಣೆಗೆ ತಾತ್ಕಾಲಿಕ ನಿಷೇಧ ಹೇರಲಿದೆ ಎಂದು ವರದಿಯಾಗಿದೆ. H-1B ಎಂಬುದು ಅಮೆರಿಕಾ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣಿತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡುತ್ತದೆ. ಪ್ರಸ್ತುತ ಅಮೆರಿಕಾದಲ್ಲಿ Full Article
business and finance ಜಿಯೋ ಪಾಲಿನ ಮೇಲೆ ಕಣ್ಣಿಟ್ಟಿವೆ ಅಮೆರಿಕಾ, ಸೌದಿ ಅರೇಬಿಯಾ ಸಂಸ್ಥೆಗಳು! By kannada.goodreturns.in Published On :: Sat, 09 May 2020 13:44:47 +0530 ರಿಲಯನ್ಸ್ ಜಿಯೋ ಸದ್ಯ ವಿದೇಶಿ ಕಂಪನಿಗಳ ಹಾಟ್ ಫೇವರಿಟ್ ಹೂಡಿಕೆಯ ಸಂಸ್ಥೆಯಾಗಿದೆ. ಬೃಹತ್ ಡಿಜಿಟಲ್ ವ್ಯವಸ್ಥೆಯನ್ನು ಸೃಷ್ಟಿಸಲು ಹೊರಟಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಕನಸಿಗೆ ಈಗಾಗಲೇ ಬೃಹತ್ ಕಂಪನಿಗಳೇ ಕೈ ಜೋಡಿಸಿವೆ. ಇದರ ಜೊತೆಗೆ ಮತ್ತೆರಡು ಬೃಹತ್ ಕಂಪನಿಗಳು ಹೇಗಾದರೂ ಮಾಡಿ ರಿಲಯನ್ಸ್ ಜಿಯೋ ಪಾಲನ್ನು ಖರೀದಿಸಬೇಕೆಂದು ಕಣ್ಣಿಟ್ಟಿವೆ. Full Article
business and finance ಕಾರ್ಖಾನೆಗಳಲ್ಲಿ ಕೆಲಸದ ಸಮಯವನ್ನು 8 ರಿಂದ 12 ಗಂಟೆಗೆ ವಿಸ್ತರಿಸಿದ ಒಡಿಶಾ ಸರ್ಕಾರ By kannada.goodreturns.in Published On :: Sat, 09 May 2020 14:30:50 +0530 ಕೊರೊನಾವೈರಸ್ ದೃಷ್ಟಿಯಿಂದ ಕಡಿಮೆ ಉದ್ಯೋಗಿಗಳ ಲಭ್ಯತೆಯಿಂದಾಗಿ ಉತ್ಪಾದನೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಒಡಿಶಾ ಸರ್ಕಾರ ಕಾರ್ಖಾನೆಗಳಲ್ಲಿನ ಕೆಲಸದ ಸಮಯವನ್ನು ದಿನಕ್ಕೆ 8 ಗಂಟೆಯಿಂದ 12 ಗಂಟೆಗಳವರೆಗೆ ವಿಸ್ತರಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಕೆಲವು ಕೈಗಾರಿಕೆಗಳು ಮತ್ತು ಕೈಗಾರಿಕಾ ಸಂಘಗಳ ಪ್ರಾತಿನಿಧ್ಯವನ್ನು ಗಣನೆಗೆ ತೆಗೆದುಕೊಂಡು ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಕೆಲವು ವಿಶ್ರಾಂತಿ ನೀಡಲು ರಾಜ್ಯ ನಿರ್ಧರಿಸಿದೆ ಎಂದು Full Article
business and finance ಪುಣೆಯ 'ಗೋಲ್ಡ್ ಮ್ಯಾನ್' ಸಾಮ್ರಾಟ್ ಮೊಜೆ ಇನ್ನಿಲ್ಲ By kannada.goodreturns.in Published On :: Sat, 09 May 2020 15:43:31 +0530 ಗೋಲ್ಡ್ ಮ್ಯಾನ್ ಎಂದೇ ಖ್ಯಾತಿಯ ಮಹಾರಾಷ್ಟ್ರದ ಉದ್ಯಮಿ ಸಾಮ್ರಾಟ್ ಮೊಜೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೈಮೇಲೆ 10 ಕಿಲೋ ಗ್ರಾಂ ಬಂಗಾರ ಹಾಕಿಕೊಂಡು ಒಡಾಡುತ್ತಿದ್ದ ಸಾಮ್ರಾಟ್ ಮೊಜೆ ದೇಶಾದ್ಯಂತ 'ಗೋಲ್ಡ್ ಮ್ಯಾನ್' ಎಂದೇ ಪ್ರಖ್ಯಾತಿಯಾಗಿದ್ದರು. 39 ವರ್ಷ ವಯಸ್ಸಿನ ಸಾಮ್ರಾಟ್, ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಅವರ ಅಂತ್ಯಸಂಸ್ಕಾರವನ್ನು ಪುಣೆಯ Full Article
business and finance ಗೃಹ ಸಾಲ ಬಡ್ಡಿ ದರ ಏರಿಕೆ ಮಾಡಿದ ಎಸ್ಬಿಐ By kannada.goodreturns.in Published On :: Sat, 09 May 2020 16:17:37 +0530 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲಗಳ ಬಡ್ಡಿ ದರವನ್ನು 0.30 ಪರ್ಸೆಂಟ್ರಷ್ಟು ಹೆಚ್ಚಿಸಿದೆ. ಆಸ್ತಿ ಅಡಮಾನ ಇರಿಸಿ ಪಡೆಯುವ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವನ್ನೂ 0.30 ಪರ್ಸೆಂಟ್ರಷ್ಟು ಏರಿಕೆ ಮಾಡಿದೆ. ಈ ಹೊಸ ಬಡ್ಡಿ ದರಗಳು ಮೇ ತಿಂಗಳ 1ರಿಂದಲೇ ಅನ್ವಯಗೊಳ್ಳುತ್ತದೆ. ಕೊರೊನಾವೈರಸ್ದಿಂದಾಗಿ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ಬರಬೇಕಾದ ಆದಾಯದ ಮೂಲಗಳು Full Article
business and finance ಚಿನ್ನದ ಬೆಲೆ ಇಳಿಕೆ: ಯಾವ ನಗರದಲ್ಲಿ ಎಷ್ಟಿದೆ ದರ? By kannada.goodreturns.in Published On :: Sat, 09 May 2020 17:37:57 +0530 ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಏರಿಳಿತ ಮುಂದುವರಿದಿದೆ. ಕಳೆದ ಹಲವು ದಿನಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಶನಿವಾರ ಇಳಿಕೆಗೊಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 300 ರುಪಾಯಿ ಇಳಿಕೆಗೊಂಡು 43,000 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 46,000 ರುಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 43,600 ರುಪಾಯಿಗೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ Full Article
business and finance 6 ಬ್ಯಾಂಕುಗಳಿಂದ 414 ಕೋಟಿ ಸಾಲ ಪಡೆದು ವಂಚಕರು ವಿದೇಶಕ್ಕೆ ಪರಾರಿ: 4 ವರ್ಷಗಳ ಬಳಿಕ ಕೇಸ್ ದಾಖಲಿಸಿದ SBI By kannada.goodreturns.in Published On :: Sat, 09 May 2020 18:24:35 +0530 ಆರು ಬ್ಯಾಂಕ್ಗಳ ಒಕ್ಕೂಟದಿಂದ 411 ಕೋಟಿ ರೂಪಾಯಿ ವಂಚನೆ ಮಾಡಿದ್ದ ಆರೋಪದ ಮೇಲೆ ಇತ್ತೀಚೆಗಷ್ಟೇ ಎಸ್ಬಿಐ ಸಿಬಿಐಗೆ ದೂರು ನೀಡಿತ್ತು. ಆದರೆ ಕೇಸ್ ದಾಖಲಿಸೋಕು ಮೊದಲೇ ವಂಚಕರು ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಎಸ್ಬಿಐ ಬಹುಕೋಟಿ ವಂಚಿಸಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿತ್ತು. ಬಸ್ಮಾತಿ ಅಕ್ಕಿಯನ್ನು ಪೂರ್ವ ಏಷ್ಯಾ ಮತ್ತು Full Article
business and finance Tax Refund मिलेगा बहुत जल्दी, बस करना होगा ये काम By hindi.goodreturns.in Published On :: Sun, 19 Apr 2020 13:52:02 +0530 नयी दिल्ली। कोरोनावायरस लॉकडाउन के दौरान टैक्सपेयर्स को राहत देने के लिए आयकर विभाग 5 लाख रुपये तक के सभी लंबित आयकर रिफंड जारी कर रहा है। जानकारी के लिए बता दें कि केवल एक सप्ताह में ही 10.2 लाख लोगों Full Article